ಮೊನ್ನೆ ಕಾಶಿಗೆ ಹೋಗಿದ್ದೆ
ಗಂಗೆಯಲ್ಲೊಂದು ಮುಳುಗು ಹಾಕಿ
ಕೋಪ ಬಿಟ್ಟು ಬಂದೆ!
ಬಡವನ ದವಡೆಗೆ ಮೂಲವಾದ
ಈ ಪ್ರಳಯಾಂತಕ ಕೋಪವನ್ನ
ಇಟ್ಟುಕೊಳ್ಳುವುದಕ್ಕಿಂತ
ಬಿಟ್ಟು ಬಿಡುವುದೇ ಮೇಲಲ್ಲವೇ ?
ಅಷ್ಟೇ ಅಲ್ಲದೆ, ಕೋಪ ಬಿಡುವುದು
ಅನಿವಾರ್ಯವೂ ಆಗಿತ್ತು!
ಮನೆಯಲ್ಲಾಗಲಿ, ಆಫೀಸಲ್ಲಾಗಲಿ
ಎಳ್ಳಷ್ಟೂ ಬೆಲೆಯಿಲ್ಲದ ಕೋಪ
ನನ್ನನ್ನೂ ತೊರೆಯಲಿ
ಯಾರಾದರೂ ದೊಡ್ಡ
ಅಧಿಕಾರಿಯನ್ನು ಆಶ್ರಯಿಸಲಿ
ಒಳ್ಳೆಯ ಬೆಲೆ ಪಡೆಯಲಿ.
*****
೨೫-೦೫-೧೯೯೩
Related Post
ಸಣ್ಣ ಕತೆ
-
ಅವಳೇ ಅವಳು
ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…
-
ಗೋಪಿ
ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…
-
ಮಿಂಚು
"ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…
-
ಮೃಗಜಲ
"People are trying to work towards a good quality of life for tomorrow instead of living for today, for many… Read more…
-
ಎರಡು ಪರಿವಾರಗಳು
ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…